Thursday 26 February 2015

invitation


ಉದಯಗಿರಿ ಶಾಲಾ ಹಿರಿಮೋತ್ಸವ,ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

ಬದಿಯಡ್ಕ: ಉದಯಗಿರಿ ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಹಿರಿಮೋತ್ಸವ,ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭವು ಫೆಬ್ರವರಿ 28 ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.  ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ  ಶ್ರೀಮತಿ   ಶಾರದರವರ ಅಧ್ಯಕ್ಷತೆಯಲ್ಲಿ ಪಂಚಾಯತು ಅಧ್ಯಕ್ಷೆ  ಶ್ರೀಮತಿ ಸುಧಾ ಜಯರಾಂ  ಉದ್ಘಾಟಿಸುವರು. ಬದಿಯಡ್ಕ ಗ್ರಾಮ ಪಂಚಾಯತು ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಮಾಹಿನ್ ಕೇಳೋಟ್,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸಮೀರ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮಕ್ಕೆ ಎಸ್ ಎಸ್ ಎ ಪ್ರೋಗ್ರಾಂ ಓಫೀಸರ್ ಶ್ರೀ ಯತೀಶ್ ಕುಮಾರ್ ರೈ, ಕುಂಬಳೆ ಬಿ.ಪಿ.ಒ ಶ್ರೀ ರಾಧಾಕೃಷ್ಣ, ಪಿ.ಇ.ಸಿ ಸೆಕ್ರಟರಿ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಮತಿ ಸಂಧ್ಯಾ ವಿ ಶೆಟ್ಟಿ , ಸಿ.ಡಿ.ಎಸ್ ಅಧ್ಯಕ್ಷೆ  ಶ್ರೀಮತಿ  ಜಯಶ್ರೀ ಮೊದಲಾದವರು ಶುಭ ಹಾರೈಸುವರು.
ಈ ವರ್ಷ ನಿವೃತ್ತ ರಾಗಲಿರುವ ಮುಖ್ಯೋಪಾಧ್ಯಾಯಿಲಿ ಶ್ರೀ ಮತಿ  ಪಿ.ಲಕ್ಷ್ಮಿ,
ನವಜೀವನ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಜಗನ್ನಾಥ ಆಳ್ವ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕುಞಣ್ಣ ನಾಯಕ್, ಶ್ರೀ  ಅಚ್ಚುತ ಮಣಿಯಾಣಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ, ಶಾಲಾ ಹಿತೈಷಿಗಳಾದ  ಶ್ರೀ  ಸೀತಾರಾಮ,  ಶ್ರೀ ರಾಮ ಮಾಸ್ಟರ್, ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶ್ರೀ ಕುಮಾರ ಇ,  ಶ್ರೀ ಮತಿ  ವಿಜಯಕುಮಾರಿ,
 ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀ  ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ವಿವಿಧ ಸ್ತರ್ಧೆಗಳಲ್ಲಿ ವಿಜೇತರಾದವರಿಗೆ ಕುಂಬಳೆ ಎ.ಇ.ಒ ಶ್ರೀ ಕೈಲಾಸಮೂರ್ತಿ ಬಹುಮಾನ ವಿತರಿಸುವರು. ನಂತರ ಅಂಗನವಾಡಿ, ಶಾಲಾ ಹಾಗೂ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

No comments:

Post a Comment