Tuesday 5 June 2018

ಪರಿಸರ ದಿನಾಚರಣೆ


ಉದಯಗಿರಿ ಶಾಲಾ ಪರಿಸರೋತ್ಸವ
ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ಪರಿಸರೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಪರಿಸರೋತ್ಸವದ ಭಾಗವಾಗಿ ನಿರ್ಮಿಸಿದ ಜೈವ ಉದ್ಯಾನವನ್ನು ಶಾಲಾ ಪಿ.ಟಿ.ಅಧ್ಯಕ್ಷಯಾದ ಶ್ರೀಮತಿ ಕುಸುಮ ಬಾಂಜತ್ತಡ್ಕರವರ
ಅಧ್ಯಕ್ಷತೆಯಲ್ಲಿಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯರಾದ
ಶ್ರೀ ಅವಿನಾಶ್ ರೈ ಬದಿಯಡ್ಕ ಉದ್ಘಾಟಿಸಿದರು. ಎಂ.ಪಿ.ಟಿ.ಅಧ್ಯಕ್ಷಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಸದಸ್ಯರಾದ, ಶ್ರೀಮತಿ ಸುನಿತ ಕ್ರಾಸ್ತ , ಅಂಗನವಾಡಿ ಕಾರ್ಯಕರ್ತೆ ಪುಷ್ಪ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಾನ ಶಿಲ್ಪಿಗಳಾದ ಕಿಶೋರ್ ಉಬ್ರಂಗಳ ಹಾಗೂ ರಘುನಂದನ ಉಬ್ರಂಗಳರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಕೃಷಿ ಭವನದಿಂದ ಲಭಿಸಿದ ತರಕಾರಿ ಬೀಜಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ ಶ್ರೀಮತಿ ರಶ್ಮಿ ಎ.ಎಸ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್. ಯಸ್ ಕಾರ್ಯಕ್ರಮ ನಿರೂಪಿಸಿದರು.