Wednesday 3 June 2015

PRAVESHOTHSAVAM REPORT


ಉದಯಗಿರಿಯಲ್ಲಿ ಪ್ರವೇಶೋತ್ಸವ

    ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿ ಇಲ್ಲಿನ ಶಾಲಾ ಪ್ರವೇಶೋತ್ಸವವು  ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಶಾಲಾ ಎಸೆಂಬ್ಲಿ, ಮೆರವಣಿಗೆ,ನವಾಗತರಿಗೆ ಸ್ವಾಗತ,ಸಭೆ ಇತ್ಯಾದಿ ಕಾರ್ಯಕ್ರಮಗಳು ಪ್ರವೇಶೋತ್ಸವದ ಭಾಗವಾಗಿ ನಡೆಯಿತು.ಸರ್ವ ಶಿಕ್ಷಾ ಅಭಿಯಾನ್ ನ ವತಿಯಿಂದ ಲಭಿಸಿದ  ಸಮವಸ್ತ್ರ,ಅಧ್ಯಾಪಕ ವೃಂದದವರು ಮಕ್ಕಳಿಗೆ ನೀಡಿದ ಕಲಿಕಾ ಕಿಟ್ ಮತ್ತು ಬಟ್ಟಲುಗಳು,ಶಾಲಾ ಪಿ.ಟಿ.ಎ ಸದಸ್ಯೆ  ಶ್ರೀಮತಿ ಬೇಬಿ ಶಾಲಿನಿ ನೀಡಿದ ಕೊಡೆ, ಶ್ರೀ ಮಾಹಿನ್ ಕೇಳೋಟ್ ಬದಿಯಡ್ಕ,  ಶ್ರೀ ರವಿ ಕೈಲಂಕಜೆ, ,ಶ್ರೀ ಮತಿ  ಪಿ.ಲಕ್ಸಿಯವರು ನೀಡಿದ ಸಿಹಿತಿಂಡಿ ಪ್ರವೇಶೋತ್ಸವವನ್ನು ಆಕರ್ಷಕಗೊಳಿಸಿತು.

    ಪ್ರವೇಶೋತ್ಸವದ ಭಾಗವಾಗಿ ನಡೆದ ಸಭಾಕಾರ್ಯಕ್ರಮವನ್ನು ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ ಉದ್ಘಾಟಿಸಿದರು. ಶ್ರೀ  ಗೋವಿಂದ ಭಟ್,  ಶ್ರೀ ರವಿ ಕೈಲಂಕಜೆ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ ಮೊದಲಾದವರು ಶುಭ ಹಾರೈಸಿದರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ  ಶ್ರೀಮತಿ  ಬೇಬಿ ಶಾಲಿನಿ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್.ಯಸ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment