ಉದಯಗಿರಿ: ಸಂತಾಪ ಸಭೆ
ಬದಿಯಡ್ಕ: ಡಾ.ಕಯ್ಯಾರ ಕಿಣ್ಣ ರೈಯವರಿಗೆ ಸಂತಾಪ ಸೂಚಕ ಸಭೆಯು ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಸಿ.ಎಚ್, ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ, ಶಾಲಾ ಹಿತೈಷಿ ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ. ಶ್ರೀ ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ ಲೀಲಾ ಮೊದಲಾದವರು ಕಯ್ಯಾರರ ಗುಣಗಾನ ಮಾಡಿದರು. ಶಾಲೆಗೆ ರಜೆ ಸಾರಲಾಯಿತು. ಒಂದು ವಾರ ಶೋಕಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು.ನಂತರ ಕವಿತಾ ಕುಟೀರಕ್ಕೆ ತೆರಳಿ ಅಂತಿಮದರ್ಶನ ಪಡೆಯಲಾಯಿತು.
No comments:
Post a Comment